Monday, June 15, 2009

ತಲೆಬರಹ ನೀವೇ ಇಡಿ

ಕುಗ್ರಾಮ,ಸರಕಾರವೇ ಸಾರಿಬಿಟ್ಟಿದೆ.ಕುಗ್ರಾಮದಲ್ಲಿ ಇರುವ ಕೆಲವು ಮನೆಗಳಲ್ಲೂ ಹಲವರ ಗಮನಕ್ಕೆ ಕಣ್ಣಿಗೆ ಬೀಳದ ಮಳೆಗಾಲದಲ್ಲಿ ಬೊಬ್ಬಿಟ್ಟು ಹರಿಯುವ ತೊರೆ ಬೇಸಿಗೆಯಲ್ಲಿ ತನ್ನಿರುವಿಗಷ್ಟೇ ಬಾಯಾರಿಕೆಯ ನೀರಿಟ್ಟುಕೊಳ್ಳುತ್ತದೆ.
ಅದರ ಅಂಕುಡೊಂಕಿನ ಸಂದಲ್ಲಿ ಅಡಿಕೆಮರದ ಸೋಗೆಯ ಗುಡಿಸಲು,ಒಬ್ಬನೇ ವಾಸ ಇರುವ ಗುಡಿಸಲು.ಯಾರ ತಂಟೆಗೂ ಹೋಗದ ಯಾರ ಮುಖವನ್ನೂ ನೋಡಲಿಚ್ಚಿಸದ ಅರೆಗೂನುಬೆನ್ನಿನ ಮಧ್ಯವಯಸ್ಕ ಅದರೊಡೆಯ.ಗೆಣಸು ಬೆಳೆಸಿ ತಿನ್ನುತ್ತನೆ ಕೆಲಸೇರಷ್ಟೇ ಬೆಳೆಸುವ ಬತ್ತವನ್ನು ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡಿ ಉಣ್ಣುತ್ತಾನೆ.ಅದರ ತವುಡನ್ನೂ ಬಿಡದೆ ಕುದಿಸಿ ಕುಡಿಯುತ್ತಾನೆ ಇಷ್ಟಕ್ಕೋ ಬಡತನಕ್ಕೋ ಅಥವಾ ಆಹಾರಕ್ಕೂ ಬೇರೆಕಡೆ ಹೋಗೋದು ಬೇಡ ಎಂದೋ...ಮೀನುತಿನ್ನುವ ಬಾಯಿಚಪಲಕ್ಕೆ ಮಳೆಗಾಲದಲ್ಲಿ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಗಾಳ ಹಾಕುತ್ತಾನೆ,ಬೇಸಿಗೆಯಲ್ಲಿ ಅದೇಬತ್ತಿಹೋಗುವ ತೊರೆಯಲ್ಲಿ ಕಾಲ್ಲುಗಳ್ನ್ನು ಸರಿಸಿಯೋ ಇಲ್ಲ ಚಿಕ್ಕ ಚಿಕ್ಕ ಬಿಲಗಳಿಗೆ ಕೈ ಹಾಕಿಯೋ ಏಡಿ ಹಿಡಿಯುಇತ್ತಾನೆ.ಆಗಲೂ ಜನರ ಕಣ್ಣಿಗೆ ಜಾಸ್ತಿಯಾಗಿ ಬಿದ್ದವನಲ್ಲ
ಹೀಗಿರುವ ಆಅರೆಬೆನ್ನಿನವನ ಬಗ್ಗೆ ಕಳ್ಳು ಕುಡಿದು ಬೀಡಿಸೇದುವವರ ಬಾಯಲ್ಲಿ ಮಾತಲ್ಲಿ ತೇಲಿಹೋಗಿದ್ದನಷ್ಟೆ.
ಯಾವುದೇ ಸರಕಾರಿ ಧಾಖಲೆಗಳಿಲ್ಲದ ಜೀವನ ಅವನದಾಗಿತ್ತು.
ಅದೊಂದುವರುಷದ ಜಡಿಮಳೆಯ ದಿನ ಬರುವವರೆಗೂ ಆ ಪುಟ್ಟ ಸೋಗೆ ಮನೆಯ ಬೆತ್ತಲಸತ್ಯ ಬೆತ್ತಲಾಗಲೇ ಇಲ್ಲ.
ಜೋರಾದ ಗಾಳಿಗೆ ತೆಂಗಿನ ಮರ ಇನ್ನು ಬಗ್ಗಿದರೆ ಸಾವೇ ಅನ್ನುವಷ್ಟು ವಾಲುತ್ತಿದೆ,ಈ ಹಿಂಸೆ ಇನ್ನುಬೇಡ ಅಂದುಕೊಂಡ ಕೆಲ ಅಡಿಕೆಮರಗಳು ತುಂಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವು...ಗೊನೆಹೊತ್ತು ಭಾರವಾಗಿದ್ದ ಬ್ಬಳೀಎ ತಾಯ್ತನವೆಸಾಕೆಂದು ನೆಲದಪ್ಪುಗೆಗೆ ಮಲಗೇ ಬಿಟ್ಟವು...ತೊರೆಯಲ್ಲಿಕೆಂಪುನೀರು ಹಲಸು ತೆಂಗಿನಕಾಯಿಗಳನ್ನು ತೇಲಿಸುತ್ತ ಕುದುರೆಜಿಗಿತದೊಂದಿಗೆಆಚೀಚೆಯ ತೋಟಗದ್ದೆಗಳನ್ನು ಸವರುತ್ತಾ...ಒಂದಷ್ಟು ಹೊತ್ತಿಗೆ ಇಡಿಯಾಗಿ ನುಂಗಿಬಿಟ್ಟಿತ್ತು.
ಮನಸ್ಸಿಗೆ ಮಂಪರು ಕವಿದಂತೆ ಆದಿನದ ವಾತಾವರಣಕ್ಕೂ ರಭಸದ ಮಳೆಯ ಮಂಪರು ಕವಿದಿತ್ತು,ಅಸ್ಪಸ್ಟ ಚಿತ್ರಣದಲ್ಲೂ ಮಿಂಚಿನ ಸ್ಪಸ್ಟತೆಯಗೆರೆಗಳು ಜೋರಾಗೇ ತನ್ನತನವನ್ನು ಮೂಡಿಸಿಹೋಗುತ್ತಿತ್ತು.
ಹಗಲಲ್ಲೂ ಕತ್ತಲು ಬೆಳಕಿನಾಟದಲ್ಲಿ ಅಂಕುಡೊಂಕಿನ ಸಂದಿನಲ್ಲಿದ್ದ ಸೋಗೆ ಮನೆ...ಶಿಥಿಲವಾಗುತ್ತಾ ಹೋಗುತ್ತಿತ್ತು...ಆಮನೆಯ ಗೋಡೆಗೆ ಹಿಂಸೆಯ ಹೆರಿಗೆನೋವು ಕಾಡುತ್ತಿತ್ತು....ತನ್ನನ್ನು ಬಗಿದುಕೊಳ್ಳಲೆಂದೇ ಈ ಪರಿಯ ಮಳೆಯನ್ನು ಅದುಬೇಡಿಕೊಂಡಿತ್ತೋ ಏನೋ...ಮಳೆಗೆ ಇನ್ನಷ್ಟು ಮತ್ತಷ್ಟುತನ್ನನ್ನು ತೋಯಿಸಿಕ್ಪೊಳ್ಳುತ್ತಾ ಇಂಚಿಂಚಾಗಿ ಬಾಯಿತೆರೆಯತೊಡಗಿತು.
ಆಮನೆಯಾಲ್ಲ್ಲಿ ಅಲ್ಲಿಯವರೆಗೂ ಇರದ ಹೊರಜಗತ್ತಿಗೆ ಕಾಣದ ಜೀವವೊಂದು ಸುರಿಯುವ ಆ ಮಳೆಗೆ ತೆವಲುತ್ತ ಸೇರಿಸಿಕೊಂಡಿತು.
ಅರೆಪ್ರಾಯದ ಹೆಣ್ನುಮಗಳು...ಕೈ ಕಾಲು ಬಾಯಿಗೆ ಬಟ್ಟೆಬಿಗಿದ ಸ್ಥಿತಿಯಲ್ಲಿ..ಅದೆಷ್ಟೋವರ್ಷಗಳಿಂದ ಜಗತ್ತಿನ ಬೆಳಕನ್ನು ನೋಡದ ಜೀವ...ಬಿರುಸು ಮಳೆಯಲ್ಲೂಪ್ರಪಂಚದ ಕಣ್ಣಿಗೆಬಿದ್ದಳು.ಪುಟ್ಟ ಕಂದನಂತೆ ತೆವೆಳುತ್ತ ತೆವಳುತ್ತಾ ರೋದಿಸುತ್ತ.
ಅವಳ ಹಿಂದೆ ಅರೆಗೂನುಬೆನ್ನಿನ ಮನುಷ್ಯ ಕರಿನೆರಳಿನಂತೆ ಅವನೂ ನೆನೆಯುತ್ತ ಸ್ಪಷ್ಟವಾಗತೊಡಗಿದ ತುಕ್ಕುಹಿಡಿದಕತ್ತಿಯನ್ನು ಗಟ್ಟಿಯಾಗಿ ಹಿಡಿದಿದ್ದ.
ಮೇಲಿನ ಮನೆಯ ರಾಮಣ್ಣ ರೈ ಗಳ ನಾತಿ ನೀರಲ್ಲಿ ಕೊಚ್ಚಿಹೋಗುತ್ತಿತ್ತು ಕೆಲಸದಾಳುಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊರೆಯ ಆಚೀಚೆ ನುಗ್ಗಿದ ನೀರಲ್ಲಿ ನೆಗೆಯುತ್ತ ಬರುತ್ತಿದ್ದವರಿಗೆ ಆ ಸೋಗೆಮನೆಯ ಇಬ್ಬರು ಕಾಣಿಸುತ್ತಾರೆ.ಅವರನ್ನು ಕಂಡ ಕೆಲಸದಾಳುಗಳು ಜೋರಾದ ದ್ವನಿಯಲ್ಲಿ ಹೋಯ್ ಹೋಯ್ ಎಂದು ಕಿರುಚಾಡುತ್ತಾರೆ. ಅನಿರೀಕ್ಷಿತವಾದ ಈ ಘಟನೆಯಿಂದ ಗಾಭರಿಯಾದ ಅರೆಗೂನುಬೆನ್ನಿನವ ಹಿಂದೆಸರಿಯುತ್ತಾನೆ ಅವಳನ್ನು ಕಡಿಯಬೇಕಿದ್ದ ಕೈಯಿಂದ ಕತ್ತಿ ಕೆಳ ಬೀಳುತ್ತದೆ.ರೈಗಳ ನಾಯಿ ಕುಯ್ ಕುಯ್ ಅಂದುಕೊಂಡೇ ನೋಟದಿಂದಾಚೆ ಸರಿಯುತ್ತದೆ.
ಅರೆಗೂನುಬೆನ್ನಿನವ ಕೆಲಸದಾಳುಗಳಿಂದ ತಪ್ಪಿಸಿಕೊಳ್ಲುವ ಪ್ರಯತ್ನದಲ್ಲಿ ರಭಸವಾಗಿ ತೊರೆಯಾಚೆ ಜಿಗಿಯುತ್ತಾನೆ...ಲೆಕ್ಕಾಚಾರ ತಪ್ಪಿಹೋಯ್ತು,ಮಳೆಯ ಚಳಿ ಕಾಲುಗಳಿಗೆ ನಡುಕ ಹತ್ತಿಸುತ್ತವೆ ತೊರೆಅವನ ಕಾಲುಗಳನ್ನುಹಿಡಿದೆಳೆಯುತ್ತದೆ...ಆಳಕ್ಕೆ...
ಅವಳ ಕಟ್ಟು ಬಿಡಿಸಲಾಯಿತು,ರೈಗಳ ನಾಯಿ ಹೇಗೋ ದಡ ಸೇರಿ ಕೆಲಸದವರನ್ನು ಸೇರಿಕೊಂಡಿತು...ಅವರು ಅರ್ಧದಲ್ಲೆ ನಿಂತಿದ್ದಕ್ಕೆ ಅದಕ್ಕೆ ಬೇಜಾರಿಗೋ ಅಥವಾ ಒಳ್ಳೆಯದೇ ಆಯಿತೆಂದೋ ಕುಯ್ ಕುಯ್ ಅನ್ನತೊಡಗಿ ಮೈಕೈ ನೆಕ್ಕತೊಡಗಿತು.
ಋತುಮಾನಗಳು ಬದಲಾಗಿದೆ
ಆ ನಾಯಿಯನ್ನು ಕಾಡಿಬೇಡಿ ರಾಮಣ್ಣರೈಯವರಿಂದ ಪಡೆದು ಅವಳು ಜೀವದ ಹಾಗೆ ನೋಡಿಕೊಳ್ಳುತ್ತಿದ್ದಾಳೆ,ಅವಳ ಮನೆ ತೊರೆಯಿಂದ ಸ್ವಲ್ಪಮೇಲೆ ಊರವರಿಂದ ಹೆಂಚುಹಾಕಿಸಿಕೊಂಡು ನಿಂತಿದೆ...
ಬೆತ್ತಲೆ ಸತ್ಯ ಇನ್ನೂ ಕತ್ತಲೆಯಲ್ಲಿ ಅಡಗಿದೆ... ಕಷ್ಟ ಆಗ್ತಿದೆ ಆದ್ರು ಪ್ರಯತ್ನ ಮಾಡ್ತೀನಿ... ಅಮ್ಮ ಸತ್ತ ಆ ಮಗಳನ್ನು ಋತುಮತಿಯಾದ ನಂತರ ಬಂದಿಸಲಾಗಿತ್ತು...ಕೈ ಕಾಲು ಬಾಯಿ ಕಟ್ಟಲಾಗಿತ್ತುಹುಟ್ಟುರೂಪದಲ್ಲೆ...ನಂತರ ಕಳೆದದ್ದು ಹಲವು ಮಳೆ ಬಿಸಿಲು ಚಳಿಗಳ ವರ್ಷಗಳು....
ಅವಳದೇ ಅಪ್ಪ...ಕ್ಷಮಿಸಿ,
ಮುಂದುವರೆಸಲು ಕಷ್ಟ ಆಗ್ತಿದೆ....

Friday, June 12, 2009

ಗೆಳತಿ-೧೬

ಹಾಳೆಗೆ ಪೆನ್ನಿನ ಸಂಗದಾಸೆ ಶಾಯಿಯನ್ನು
ಲೀನ ಮಾಡಿಸಿಕೊಳ್ಳುವಾಸೆ
ಬಣ್ಣವಿಲ್ಲದ ಕಾಮ.
ಹಸಿದ ಮುಖವ ನನಗೆ ತೋರಿಸಿ
ಮುತ್ತಿಕ್ಕುವೆಯಾ ಎಂದು ನೀನು
ನೋಡಿದಂತಾ ಆಸೆ

ಗೆಳತಿ-೧೫

ನೀ ನಡೆವ ಹಾದಿಯಲ್ಲಿ ನಾ ಹೇಗಿದ್ದರೂ ಸರಿಯೆ
ಅಂದ
ಕ್ರಷ್ಣ ಮುಳ್ಳಾಗಿ ಚುಚ್ಚಿದ ಅವನರ್ಥದಲ್ಲಿ ಅದುಪರಕಾಯ ಪ್ರವೇಶ
ನಿನಗೋ ಸಹಿಸಲಸಾಧ್ಯ ನೋವು
ಆ ನೋವಲ್ಲೆ ಅವನ್ಯಾವಾಗ ನಿನ್ನ ಕಿವಿಸಂದಿಯಲಿ ಬೆರಳಾಡಿಸಿ
ನಲ್ಲೇ ಅಂದನೋ
ನೋವೇ ಮರೆತು ನೀ ತಬ್ಬಿದಿಯಲ್ಲೇ...ಹೀಗಿದ್ದರೂ ಇಷ್ಟ ಎಂದು
ಕೈ ಹಾರ ಬಳಸಿ ಬಳಸಿ
ನಿನ್ನಂತ ಹಾರಗಳೆಷ್ಟೋ ಗೆಳತಿ ಕ್ರಷ್ಣ ಪೂಜೆಗೆ

ಗೆಳತಿ-೧೫

ಗೆಳತಿ-೧೪

ನಿನ್ನ ವಯಸ್ಸು ಕೇಳೋದಿಲ್ಲ ನಡಿಗೆಯೇ ಹೇಳುತ್ತಿದೆ ನಿನ್ನ ಬಯಕೆ
ಕ್ರಷ್ಣನ ಧ್ಯಾನಿಸಲು ನೀ ಹೊರಟಿರುವೆ ಎಂದು
ನಿನ್ನ ಕಣ್ನುಗಳೆ ಬೇಡುತ್ತಿವೆ ಅರ್ಪಣೆಯ ಒಪ್ಪಿಸಿಕೋ ಎಂದು
ನಿನ್ನಿಷ್ಟ, ಆದರೂ ಹುಶಾರು ಅವನು ಸಾಚಾ ಅಲ್ಲ ಕಳ್ಲ
ಮತ್ತೆ ಮತ್ತೆ ನೀ ಬೇಕೆಂದು ಅನಿಸುವಾಗಲೆಲ್ಲ ಮತ್ತೆ ಮತ್ತೆ ಬಟ್ಟೆ
ಕದಿಯುತ್ತಾನೆ.
ನಿನ್ನ ಯವ್ವನ ಅವನಪ್ರಾಣ.

ಗೆಳತಿ-೧೩

ಕಾಮದ ಕಣ್ಣೀರಲ್ಲೂ ಬೆಳೆಯುತ್ತೀಯಾ
ಯವ್ವನದ ಬಿಸಿಲಲ್ಲೂ ಅರಳುತ್ತೀಯ
ಬೆಚ್ಚಗಿನ ಮನಸ್ಸು ತಣ್ನಗಾಗುತ್ತ ಮತ್ತೆ ಮುದುರುತ್ತೀಯ
ಹಲವು ದಿನಗಳ ಆಟದಲ್ಲಿ ಅದೆಷ್ಟು ಜನರನ್ನ
ತನ್ನತ್ತ ಸೆಳೆಯುತ್ತೀಯ... ಎಲ್ಲರಿಗೂ
ಆಸೆ ತೋರಿಸುತ್ತ ತೋರಿಸುತ್ತ ನಿರಾಶೆಯ ಕೈಗಿಟ್ತು ಗರ್ಭ
ಕಟ್ಟುತ್ತೀಯ...
ಓ ತಾವರೆಯೆ ನೀನು ಗೆದ್ದೆಯಾ
ಕ್ರಷ್ಣ ಸೋತನಾ

Thursday, June 11, 2009

ಗೆಳತಿ-೧೨

ನೀ ಕುಳಿತ ಜಾಗದಲ್ಲಿ ಅದೇನು ಕಾವು
ಅದೆಷ್ಟು ಹಿತ..ಹಿತ..ಲೀನ ಹಿತ
ಮನೇಲಿ ಅವಳಿಗೆ ಜ್ವರ ಅದೆಷ್ಟು ಸುಡು ಸುಡು
ದೂರನಿಲ್ಲುವಂತೆ ಮಾಡುವ ಕುಲೀನ
ತಪ್ಪು ನನ್ನದಲ್ಲ,ನಕ್ಷತ್ರದ್ದು-ರೋಹಿಣೀ....

ಗೆಳತಿ-೧೧

ನೋಡಲೇನಿದೆ ನಿನ್ನಲ್ಲಿ ಮಣ್ಣು
ಕೋಲ್ಮಿಂಚು ಹೊಳೆಯಲು ನಿನ್ನ ಕಣ್ಣುಗಳಲ್ಲಿ ಆಸೆಗಳೇ ಇಲ್ಲ
ಒಂದು ಸೆಳೆತ-ತಬ್ಬಿಕೊಳ್ಳಲು ನಿನ್ನಲ್ಲಿ ನಿಲುವೇ ಇಲ್ಲ
ಆದರೂ ನೀನ್ಯಾಕೆ ಕಾಡುವೆ...ಗೊತ್ತಾಯ್ತು
ಹದಿನಾರರ ಮಹಿಮೆಯೇ ಹಾಗೆ,
ಉಬ್ಬಬೇಡ
ಕ್ರಷ್ಣನಿಗೆ ಇಂದಿಗೂ ಹದಿನೆಂಟು ದಾಟಲೆ ಇಲ್ಲ

ಗೆಳತಿ-೧೦

ಮಧ್ಯ ಕುಡಿದರೇ ಮತ್ತು
ಮಾತನ್ನ ಹೊಸಕಿ ಹಾಕಿದವಳು
ಹತ್ತಿರ ಸುಳಿದರೂ ಸಾಕು ಎಲ್ಲ
ಇಂದ್ರಿಯಗಳಲ್ಲು ಶಯನರಾಗ
ಓ... ಮಲ್ಲಿಗೆಯೆ
ಕ್ರಷ್ಣನ ಎದೆಯೋಳಗು ಐಸ್ ಇಟ್ಟವಳು
ನೀನೇನಾ...ಎಂಬತ್ತರ
ಯುವಕನನ್ನೂ ಬಡಿದೆಬ್ಬಿಸಿದವಳು ನೀನೆನಾ

ಗೆಳತಿ-೯

ನೀನು ತೀರಾ ಚೆಲ್ಲುಚೆಲ್ಲು-ವ
ಬೀರಿನಲ್ಲಿ ಉಕ್ಕುವ ನೊರೆಯ ತರಹ
ತೀರ ಕಿವಿಯಾನಿಸಿದರೆ ಚಿಟಿ ಚಿಟಿ ಸಂಗೀತವನ್ನು ಧೂಳು
ಹನಿಯಾಗಿ ಚಿಮುಕಿಸುವ...ಮದದವಳು ನೀನು
ಕ್ರಷ್ಣನ ರಮಿಸಲು ಪಬ್ಬಿಗೂ ನುಗ್ಗಿದಿಯಲ್ಲೆ
ಅದಕ್ಕೆ ನಿನ್ನ ಮೇಲೆ ಎಲ್ಲರ ಲಲ್ಲೆ ಜೊತೆಗೆ ಹಲ್ಲೆ

ಗೆಳತಿ-೮

ಕಚಗುಳಿ ಇಡಲು ನಿನ್ನ ಅನುಮತಿ ಬೇಡ
ಅದು ನನ್ನ ಹಕ್ಕು
ನಿನ್ನನ್ನು ಮುತ್ತಿಕ್ಕಲೆಂದೇ...ಆಲಿಂಗಿಸಲೆಂದೇ
ಅವತರಿಸಿದ್ದು ನಾನು
ನೀನು; ಬೇಕೆಂದು ತಪಸ್ಸು ಮಾಡಿದರೂ ನಿನ್ನ ಕೈಗೆ ಸಿಗದವಳು ನಾನು
ಹೀಗೆಂದು
ಅಪಹಾಸ್ಯಮಾಡುತ್ತಿರುವೆಯಾ ಮುಂಜಾವಿನ ಮಂಜೇ...
ಕ್ರಷ್ಣನ ಕಾಡಿಸಿದವರಲ್ಲಿ ನೀನೂ ಒಬ್ಬಳಾ

Wednesday, June 10, 2009

ಗೆಳತಿ-೭

ಕನಸಲ್ಲಿ ಬಂದಾಗ ಅದೆಷ್ಟು ಮದುರನೀ
ಹಳೆಚಿತ್ರಗೀತೆಗಳಂತೆ
ನಿಜರೂಪದಲ್ಲಿ ಅದೆಷ್ಟು ದಡಬಡನೀ
ರಿದಮಿಲ್ಲದ ಹಾಡಿನಂತೆ

ಗೆಳತಿ-೬

ಕಂಡ ಕಂಡ ಅಂದಚಂದದವರನ್ನು ನೀ ನನ್ನ ಗೆಳತಿಯಾಗಿದ್ದರೆ ಅಥವ
ಅನ್ನುವುದಾದರೆ ನಾನೂ ಕ್ರಷ್ಣನಾಗಬಲ್ಲೆ...ಆದರೆ
ಹದಿನಾರುಸಾವಿರ ಹಾಡುಕಟ್ಟುವುದರಲ್ಲೇ ನನ್ನ ನಾ ಕಳೆದರೆ ಸಿಗುವವಳೊಬ್ಬಳನ್ನು
ಕಳ್ಕೋತೀನಲ್ಲ...
ಅದಕ್ಕೆ ನಾ ಶ್ರೀರಾಮಚಂದ್ರ

ಗೆಳತಿ

ನಿನ್ನ ನಗುವಿಗೂ ಸೋತೆ
ನಿನ್ನ ನಡುವಿಗೂ ಸೋತೆ
ಸೋತೆನಲ್ಲ ಅಂದುಕೊಂಡಾಗಲೂ ಸೋತೆ
ನಿನ್ನ ಗೆದ್ದುಕೊಂಡೆನಲ್ಲ ಅಂದಾಗಲೂ ಸೋತೆ
ನೀ ಸೋತೆ ಅಂದುಕೊಂಡಾಗಲೆಲ್ಲ ,ಕಳಚಿಟ್ಟನಲ್ಲ
ನಿನ ನಲ್ಲ ಮೈ ಮುಚ್ಚೋ ಬಟ್ಟೆ.
ಆಗಲೆ ಸೋತೆ
ಗಲ್ಲ ಹಿಡಿದೆತ್ತಿಕಣ್ಣಲ್ಲಿ ಕಣ್ಣಿಟ್ಟು ನೀ ಪ್ರಶ್ನೆ ಮಾಡಿದಿಯಲ್ಲ ಎಲಾ
ಗಂಡಸೇ ಎಂದು...ಅಲ್ಲಿಯವರೆಗೂ ಸೋತೆ. ನಿನ್ನ ಭಕ್ತನಿಗೆ
ಹೀಗ್ಯಾತಕೋ ಕ್ರಷ್ಣಾ...ಎಂದು ಕೇಳಿದವನಿಗೆ ಹಾಡದ
ಕೊಳಳನು ಹಿಡಿದ ಕಲ್ಲುಕ್ರಷ್ಣ ನೀ ಎದುರಾದಿಯಲ್ಲವೇ...
ಕಳ್ಳ..ನಂಗೊತ್ತೋ ನೀನವಳ ಕಿವಿಯಲ್ಲಿ ಉಸಿರಿರುವೆ
ಈಗ ಹೀಗಿರುವೆ ಅವನಾಚೆ ಹೋದಮೇಲೆ ನಾ ಅಲ್ಲಿರುವೆ

Sunday, June 7, 2009

ಅವಳೊಬ್ಬಳು

ಒಂದು ದಿನ ಅವನನ್ನು ಅವನ ಗೆಳೆಯರು ಅವರಲ್ಲಿ ಒಬ್ಬನ ಹುಟ್ಟುಹಬ್ಬಕ್ಕೆ ರಾತ್ರಿ ಹತ್ತು ಗಂಟೆಗೆ ಬರುವಂತೆ ಹೇಳಿದ್ದರು .ಹೋಗದಿದ್ದರೆ ಸರಿ ಇರೊದಿಲ್ಲ ಮಾತುಕೇಳಬೇಕಾಗುತ್ತದೆ ಎಂದು ಹತ್ತು ಗಂಟೆಗೆ ಹೋದರೆ ಆ ಮನೆಯಲ್ಲಿ ಯಾರೂ ಇರಲಿಲ್ಲ.
ಆ ಮನೆ ಇದ್ದಿದ್ದು ಮಾಗಡಿ ರಸ್ತೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ.ಅವನಲ್ಲಿ ಇದ್ದುದ್ದು ಮತ್ತೆ ಹಿಂದಿರುಗಲು ಬೇಕಾದಷ್ಟು ಹಣ ಮಾತ್ರ.ಹಲವು ವರ್ಷಗಳ ಹಿಂದೆ ಇದು ನಡೆದಿದ್ದು.
ಹೊತ್ತು ಕಳೆಯುತ್ತಿದ್ದಂತೆ ಗೆಳೆಯರು ಬರುತ್ತಾರೊ ಇಲ್ವೋ ಅನ್ನುವ ಅನುಮಾನ ಕಾಡೊದಕ್ಕೆ ಶುರುವಾಗಿ ಮನೆಯ ಹೊರಗಡೆ ಇರೋದೆ ಹಿಂಸೆ ಅನ್ನಿಸೋಕೆ ಶುರುವಾಯಿತು.ವಿಪರೀತ ಚಳಿಯ ಜೊತೆಗೆ ಆಮನೆಯ ಯಜಮಾನಿ ಆಗಾಗ ಬಂದು ನೋಡುತ್ತಿದ್ದಳು.ಗೆಳೆಯರು ಅವಳನ್ನು ವರ್ಣಿಸುತ್ತಿದ್ದ ರೀತಿಗೆ ತಾಕ್ಕಹಾಗೆ ಅಂದವಾಗಿ ಮತ್ತುಕಟ್ಟುಮಸ್ತಾಗಿದ್ದಳು.
ಪಕ್ಕದ ಇನ್ನೊಂದು ಬಾಗಿಲಿಂದ ಇನ್ನೆರಡು ಮುಖಗಳು ಆಗಾಗ ಇಣುಕುತ್ತಿದ್ದವು.ಅದುಅವಳ ತಂಗಿ ಮತ್ತು ತಂಗಿಯ ಗಂಡನದ್ದೆಂದು ತಡವಾಗಿ ಅರ್ಥವಾಯಿತು.
ಆ ಸುಂದರಿ ಹಲವಾರೆಉ ಸರ್ತಿ ಬಂದು ಅವನನ್ನು ವಿಚಾರಿಸಿ ವಿಚಾರಿಸಿ ಒಳಗೆ ಬರುವಂತೆ ಪ್ರೇರೇಪಿಸುತ್ತಿದ್ದಳು.ಹೀಗೇ ಆಗುತ್ತದೆಎಂದು ತಿಳಿದಿದ್ದ ಮಿಕ್ಕಿಬ್ಬರು ಇನ್ನೂ ಸಂದಿಯಿಂದ ನೋಡತೊಡಗಿದರು.ಅವರನ್ನು ವಾರೆಗಣ್ಣಲ್ಲಿ ನೋಡಿದ ಆಕೆ ಅವನ ಕೈ ಹಿಡಿದೆಳೆಯಲು ಶುರುಮಾಡಿದಳು.ಅಷ್ಟರಲ್ಲಿ ಎದುರಿಗಿರುವ ಮನೆಯ ಬಾಗಿಲು ತೆರೆದು ಹೊರಬಂದ ಒಬ್ಬಾತ ಏನ್ ದರಿದ್ರದೋರಯ್ಯ ಒಳಗೆ ಹೋಗೋಕೆ ಆಗಲ್ವ ಅಂದ

Friday, June 5, 2009

ಕರ್ಮ

ಕೋಗಿಲೆ......
ಈ ಹೆಸರನ್ನ ನಿನಗ್ಯಾಕಿಟ್ಟರೋ ಯಾರಿಟ್ಟರೋ....ಅವರು ಸಿಕ್ಕರೆ ನಿನ್ನ ಜಾತಕ ಕೇಳೋಣ ಅಂತಿದ್ದೀನಿ ಯಾಕೆ ಗೊತ್ತಾ ,ನಿಂದ್ಯಾವ ಕರ್ಮದ ಬದುಕು ಅಂತಾನೆ ನಿನ್ನನ್ನ ನಿನ್ನ ದನಿಯನ್ನ ನಿನ್ನ ಹಾಡನ್ನ ಹೊಗಳಿದ ಕವಿಗೂ ಇಷ್ಟ ಪಟ್ಟ ಕೇಳುಗನಿಗೂ ಇವತ್ತಿಗೂ ಗೊತ್ತಿಲ್ಲ.ಎಲ್ಲರಿಗೂ ತಿಳಿದಿರುವುದೊಂದೇ ನೀನು ಸೋಮಾರಿ.
ಎಲೆ ಸೋಮಾರಿಯೇ.....

ನೆನ್ನೆ ನಿನ್ನ ಒಂದು ಕರ್ಮ ನೋಡಿದೆ, ಹಸಿವು ಅಂತ ಊಟಕ್ಕೆ ಕೂತಿದ್ದೆ, ನೀನು ನನ್ನ ತುತ್ತನ್ನ ತಡೆದೆ ತುತ್ತು ಬಾಯಿಗೆ ಹೋಗುತ್ತಿದ್ದಂತೆ ನೀನೇ ಮಾರ್ಮಿಕಕವಾಗಿ ಅಳುವ ಬದುಕಿಸಲಾರಿರಾ ಅನ್ನುವ , ಕುಹೂ ಕುಹೂ ದನಿಯಲ್ಲಿ ಸತ್ತೇಹೋದೆ ಅನ್ನುವ ಗೊಗ್ಗರು ದನಿ ಕೇಳಿದೆ. ಅದೆಷ್ಟು ರಾಕ್ಷಸರು ನಿನ್ನನ್ನು ಮುತ್ತಿ ಕೇಕೆ ಹಾಕುತ್ತಿದ್ದರು ,ನೀನೋ ಭಯಾನಕವಾಗಿ ರೆಕ್ಕೆ ಪುಕ್ಕಗಳನ್ನು ಕಳೆದುಕೊಳ್ಳುತ್ತ ಅವರು ಕೊಡುವ ಏಟುಗಳನ್ನು ತಿನ್ನುತ್ತಾ ಅಲ್ಲಲ್ಲಿ ನೆತ್ತರು ಚಿಮ್ಮಿಸುತ್ತಾ ಕಿಟಾರ್ ಅಂತಿದ್ದೆ .ನಾನು ಹಾ... ಚೂ... ಅಂದು ನಿನ್ನ ಸುತ್ತಲಿರುವವರನ್ನು ಓಡಿಸಲು ಯತ್ನಿಸಿದರೂ ಪಾಲಿಸಲಿಲ್ಲ.ನಾನು ನಿನ್ನಿಂದ ದೂರ ಇದ್ದೆ ನೀನಿರುವ ಕಟ್ಟಡದ ಆಚೆ ಬದಿಯ ಇನ್ನೊಂದು ಮನೆಯಲ್ಲಿ ಅದೂ ಕಿಟಿಕಿಯ ಸರಳುಗಳ ಹಿಂದೆ. ನಿನ್ನ ಕಣ್ಣುಗಳು ನೀನು ಹಾಡುವಾಗಲೆ ನೋಡಲಾಗದಷ್ಟು ಕೆಂಪು ಈ ಸ್ಥಿತೀಲಿ ನೋಡಲಂತು ಸಾಧ್ಯವೇ ಇಲ್ಲ ಅನ್ನೋವಷ್ಟು ಕೆಂಪು ಕೆಂಪು.....
ಅದು...
ದುಖವೋ ನಿನ್ನ ಹುಟ್ಟಿಗೆ ನಿನ್ನದೇ ಶಾಪವೋ ....
ಅದ್ಯಾರ ಬಳಿ ನೀನು ಕೇಳಿಕೊಂಡು ಬರುವೆಯೋ ಗೊತ್ತಿಲ್ಲ.ಆದರು ನನಗೆ ಉತ್ತರ ಬೇಕು ನೀನ್ಯಾಕೆ ಕೊನೆಪಕ್ಷ್ಯಗೂಡುಕಟ್ಟೋದನ್ನ ಕಲೀಲಿಲ್ಲ?..?
ಗರ್ಭಿಣಿ ಅಂತ ಗೊತ್ತಾಗೋದೆ ತಡ ಯಾರದೋ ಮನೆಗೆ ನುಗ್ತೀಯಲ್ಲ. . ಗೀಜಗನಂತೆ ಸುಂದರವಾಗಿರಬೇಕಾಗಿಲ್ಲ ನಿನ್ನ ಮೊಟ್ಟೆಯನ್ನ ನಿನ್ನದೇ ಜಾಗದಲ್ಲಿ ಇಡುವಂತಾದ್ದು ನಿನ್ನ ಮರಿಗಳನ್ನ ನೀನೇ ಬೆಳೆಸುವಂತಾದ್ದು.ಇಲ್ಲದಿದ್ದರೆ ನಿನ್ನ ಹಾಡನ್ನ ಮನಪೂರ್ತಿ ಆಲಿಸುವ ನಮ್ಮ ಕರ್ಮ ನೋಡು ಯಾವುದೇ ತಪ್ಪು ಮಾಡದ ನಿನ್ನ ಹಾಡುಗಾರ[ರ್ತಿ] ಮರಿಗಳು ಇನ್ಯಾರದೊ ರೆಕ್ಕೆಗಳಡಿಯಲ್ಲಿ ಹುಟ್ಟಿ ,ಮೋಸಹೋದ್ವಿ ಎಂದು ಆ ಕಾಗಮ್ಮಗಳಿಗೆ ಗೊತ್ತಾದಾಗ ಅವರು ಕಚ್ಚಿ ಕಚ್ಚಿ ಹಿಂಸೆ ಕೊಡೋದನ್ನ ನೋಡ್ಬೇಕಲ್ಲ.
ನಾವು ಮನುಷ್ಯರು ನಮ್ಮಲ್ಲೆ ಹಿಂಸೆಗೆ ಬರವಿಲ್ಲ ನೆಮ್ಮದಿಗೆ ಜಾಗವಿಲ್ಲ ಅಂದಾಗ ನಾವು ಮೆಚ್ಚಿದ ನಿನ್ನಲ್ಲೂ ಯಾಕೆ ಹೀಗೆ.?
ನಿನ್ನ ಬಗ್ಗೆ ಒಂದು ಸಂದೇಹ ಮೂಡ್ತಾ ಇದೆ ನೀನು ಖಂಡಿತ ಸೋಮಾರಿಯಲ್ಲ ಕಾಮರೂಪಿ .
ಮಾಮರ ಚಿಗುರಿದಾಗ ನೀನು ಹಾಡುವೆಯೋ....ನೀನುಹಾಡಿದಾಗ ಮಾಮರ ಚಿಗುರುವುದೋ ....ನಿನ್ನ ಮಾದಕ ದನಿಗೆ ನಮ್ಮ ಕಾಮದಲ್ಲೂ ಜಾಗ ಸಿಕ್ಕಿದ್ದಂತೂ ನಿಜ....ಒಂದಷ್ಟು ಮಕ್ಕಳು ಹುಟ್ಟಲ್ಲೆ ಬೀದಿಪಾಲಾಗಿದ್ದೂ ನಿಜ...
ವಂದನೆಗಳಿಗೆ ಮುನ್ನ ಗೂಡು ಕಟ್ಟಲಾಗದಿದ್ದರೆ ಹಾಡು ಕಟ್ಟುವುದೂ ನಿಲ್ಲಿಸು.