Monday, July 14, 2008

ಪಾಚಿಹಳ್ಳ

ಮಧ್ಯಾಹ್ನವೇ ಮೋಡ ತೀರ ಕಪ್ಪಿಟ್ಟಿತ್ತು ಆ ಕಪ್ಪನ್ನು ಸೀಳುವಂತೆ ತನ್ನತನವನ್ನು ತೋರಿಸಲು ಮಿಂಚು ಜೋರಾಗಿ ಪಳಕ್ಕನೆ ಉದ್ದುದ್ದಕ್ಕೆ ಓಡುತ್ತಿತ್ತು ಹಿಮ್ಮೇಳದಲ್ಲಿ ದೊಡ್ಡ ಸದ್ದಿನ ಗುಡುಗು ಇತ್ತು.ತಣ್ಣಗಿನ ಚಳಿಇತ್ತು..ಮುದುಡಿಕೊಳ್ಳುವಂತ ವಾತಾವರಣ.....ಇದ್ದಕ್ಕಿದ್ದಂತೆ ಜೋರಾಗಿ ಮಳೆ ಶುರುವಾಯ್ತು.
ಪ್ರತಿ ವರ್ಶದ ಮಳೆಗೂ ಪಾಚಿಹಾಳ್ಳದ ಸೇತುವೆ ತುಂಬಿಹರೀತಿತ್ತು ಶಾಲಾಮಕ್ಕಳಿಗೆ ಮತ್ತು ಹೆಂಗಸರಿಗೂ ಆಗ ತೊಂದರೆಯಾಗುತ್ತಿತ್ತು.ಊರವರ ಬೇಡಿಕೆಯಂತೆ ಅಲ್ಲಿನ ತಾಲೂಕು ಪಂಚಾಯತ್ ಕಾಮಗಾರಿ ಕೈಗೊಂಡು ಹಳೆಸೇತುವೆ ಕೆಡವಿ ಹೊಸ ಸೇತುವೆ ಕಟ್ಟಿದ್ದರು.ಲೋಕಲ್ ಮಂಡಲ್ ಪಂಚಾಯತ್ ಅಧ್ಯಕ್ಶರರ ಉಸ್ತುವಾರಿ ಇತ್ತು.ಏನೂ ಮುಟ್ಟದೆ ಕೆಲಸ ಮುಗಿಸಿದರೆ ಅಪವಾದ ಅನ್ನುವಂತ ಕೈಕರಾಮತ್ತು ಸಣ್ಣದಾಗಿ ನಡೆದಿತ್ತು.ಈಗಪಾಚಿಹಳ್ಳಸೇತುವೆ ಸ್ವಲ್ಪ ಉದ್ದಕ್ಕು ಎತ್ತರಕ್ಕು ಬೆಳೆದಿತ್ತು.ಹೊಸ ಸೇತುವೆ ಕಟ್ಟೋದಕ್ಕಿಂತ ಹಳೆ ಸೇತುವೆ ಕೆಡವುದಕ್ಕೆ ಹೆಚ್ಚು ಸಮಯ ಮತ್ತುಅರ್ಧದಶ್ಟು ದುಡ್ಡು ತಿಂತಂತೆ.
ಇಂತಹ ಸೇತುವೆಯ ಪಕ್ಕದಲ್ಲಿಯೆ ಮಂಚೇಗೌಡರ ಒಂದು ಬಾಡಿಗೆ ಮನೆ ಇತ್ತು ಹೆಸರು"ಸುಗುಣ"
ಸುಗುಣದಲ್ಲಿ ಬಾಡಿಗೆಗೆ ಇದ್ದವನು ಮಂಚೇಗೌಡರ ಗೆಳೆಯ ವಿನಯ.ಅವನಿಗೆ ವಿಪರೀತ ಹುಡುಗಿಯರ ಚಟ ಆ ಕಾರಣಕ್ಕಾಗಿಯೆ ಪೇಟೆಗಿಂತ ಸ್ವಲ್ಪ ದೂರ ಇರುವಂತೆ ಮನೆ ಮಾಡಿದ್ದಾನೆ.ಮಂಚೇಗೌಡರಿಗೂ ಇದು ತಿಳಿಯದ ವಿಚಾರವೇನಲ್ಲ.ಬೋರಾದಾಗ ಅವರೂ ವಿನಯನ ಮನೆಯಲ್ಲಿ ಕಾಲ ಕಳೆದದ್ದುಂಟು.
ಇವತ್ತಿನ ಮಳೆ ಸೀಸನ್ ಮಳೆಯಲ್ಲ ಅಕಾಲಿಕ ಅದುತುಂಬಾ ಜೋರಾಗಿ ಸುರಿಯಲಾರಂಬಿಸಿದಾಗ ಇಡಿಯ ವಾತಾವರಣವೇ ಮಳೆಗಾಲವನ್ನು ಮೀರಿಸುವಂತಿತ್ತು.
ವಿನಯ ಬೆವರುತ್ತಿದ್ದ ಮುಖವನ್ನೊರಸುತ್ತ ಕಿಟಕಿ ಬಳಿಬಂದು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದ. ಮೈಯನ್ನೊಮ್ಮೆ ಲಟಿಕೆ ತೆಗೆಯುವಂತೆ ತಿರುಗಿಸಿದ ಅವನಲ್ಲಿ ತಾನೊಬ್ಬ ಮಹಾಗಂಡಸು ಅನ್ನುವ ಬೇಡವಾದ ಅಹಂಕಾರ ಮನೆಮಾಡಿತ್ತು.ಸಿಗರೇಟು ಹಚ್ಚಿದವನೆ ತಿರುಗಿ ಮಂಚದತ್ತ ನೋಡುತ್ತಾನೆ ಸೋತ ಬಂಗಿಯಲ್ಲಿ ಅಡ್ಡದಿಡ್ಡಿ ಮಲಗಿದ್ದ ಇಬ್ಬರು ಹುಡುಗಿಯರ ನಗ್ನ ದೇಹಗಳಿದ್ದವು.ಇವನ ನೋಟಕ್ಕೆ ಅವರು ನಿನ್ನ ಬಳಿ ಸಾಧ್ಯೈಲ್ಲ ಅನ್ನುವಂತೆ ಮುಖಭಾವ ಮಾಡಿದರು ವಿನಯ ಮತ್ತಶ್ಟು ಗೆಲುಮುಖದವನಾದ.
ಹೊರಗಡೆ ಧಾರಾಕಾರ ಮಳೆ ಹಟಕ್ಕೆಬಿದ್ದಂತೆ ಬೀಳುತ್ತಿತ್ತು.ಪಾಚಿಹಳ್ಳವು ವಿನಯನಂತೆ ತುಂಬಿಹರಿಯುವ ಯೌವ್ವನಾವಸ್ಥೆ ಪಡೆದಿತ್ತು ಉಕ್ಕುವ ರಭಸದಲ್ಲಿ ಸುತ್ತಲಿನ ಬಗ್ಗೆ ಗಮನವೇ ಇರಲಿಲ್ಲ,ತನ್ನಿಂದೇನು ಕೆಡುಕಾಗಬಹುದು ಎಂಬುದರ ಪರಿವೆಯೇ ಇರಲಿಲ್ಲ.ಹುಲುಸಾಗಿ ಬೆಳೆದಿದ್ದ ಪ್ರೀತಿಯಿಂದ ಬೆಳೆದಿದ್ದ ರೈತರ ಶ್ರಮವನ್ನು ಯಾವಕನಿಕರವೂ ಇಲ್ಲದೆ ನೆಕ್ಕುತ್ತ ಮುಳುಗಿಸುತ್ತ ಸಾಗಿತ್ತು ಬಲಾತ್ಕಾರ.ಸೇತುವೆಗೆ ಸ್ವಲ್ಪ ಎತ್ತರಕ್ಕೆ ಬೀಡಾಡಿಗಳ ಒಂದು ಚಿಕ್ಕ ಟೆಂಟ್ ಇತ್ತು ಮೇಲಿಂದ ಸುರಿಯೋ ಮಳೆಗೇ ತತ್ತರವಾಗಿತ್ತು ಈಗ ಬುಡದಿಂದಲೇ ನೀರಾಕ್ರಮಣ ಶುರುವಾಗಿತ್ತು.ಅಲ್ಲಿದ್ದ ಪುಟ್ಟ ಹುಡುಗಿ ಮಿನ್ನು ಇರೋಬರೋದನ್ನು ಎತ್ತಿಕೊಳ್ಳುತ್ತಿದ್ದಂತೆ ಕೆಲ ಗಂಡಸರು ಬಂದು ಬೀಡಾಡಿ ಜನರಿಗೆ ಬೈಯ್ಯುತ್ತ ಮಿನ್ನುವನ್ನು ಎತ್ತಿಕೊಂಡು ಇನ್ನೂ ಸ್ವಲ್ಪ ಎತ್ತರದ ಜಾಗಕ್ಕೆ ತಲುಪುತ್ತಿದ್ದಂತೆ ಅವರ ಹಿಂದೆಯೆ ನಾಯಿ ಗುಲ್ಲಿಯು ಹಿಂಬಲಿಸಿತ್ತು.ಆ ಮಿನ್ನುವಿನ ಅಪ್ಪಾಮ್ಮಹೊಟ್ಟೆಪಾಡಿಗೆ ಪೇಟೆಗೆ ಹೋದವರು ಇನ್ನೂ ಬಂದಿರಲಿಲ್ಲ.ನಾಯಿ ಗುಲ್ಲಿ , ಮಿನ್ನು ಮತ್ತು ಜನರನ್ನು
ಅಳುತ್ತಾ ಸ್ವಲ್ಪ ಹಿಂಬಾಲಿಸಿದವಳೆ ಮತ್ತೆ
ಜೊರಾಗಿ ಅರಚುತ್ತ ಟೆಂಟಿನ ಬಳಿ ಬರುವಾಗ ನೀರು ಗುಲ್ಲಿಯ ಮೂವರು ಮಕ್ಕಳಿದ್ದ ಬುಟ್ಟಿಯನ್ನು ಅಲುಗಾಡಿಸುತ್ತಿತ್ತು.ಗುಲ್ಲಿ ಬುಟ್ಟಿಯ ಮೇಲೆ ಹತ್ತಿ ಕುಳಿತರು ಪ್ರಯೋಜನವಾಗಲಿಲ್ಲ ಹೊರಗೋಡಿ ಬಂದು ಮಿನ್ನುವನ್ನು ನೊಡುತ್ತ ಶಕ್ತಿಇದ್ದಶ್ಟು ಜೋರಾಗಿ ಬೊಗಳುವುದಕ್ಕೆ ಶುರು ಮಾಡಿದಾಗ ಮಿನ್ನುವಿಗೆ ಜನಬಂದುಗಡಿಬಿಡಿ ಮಾಡಿದಾಗ ಸಹಾಯದ ನೆಪದಲ್ಲಿ ಅವಹೇಳನಮಾದುತ್ತಿದ್ದಾಗ ಮರೆತುಬಿಟ್ಟ ಗುಲ್ಲಿ ಮತ್ತು ಅವಳ ಮಕ್ಕಳ ನೆನಪಾಗಿ ಕಿರುಚಿಕೊಂಡವಳೇ ಟೆಂಟಿನ ಹತ್ತಿರ ಓಡುತ್ತಾಳೆ ಜನರಿಗೆ ಏನೆಂದು ತಿಳಿಯುವುದಿಲ್ಲ.ಮಿನ್ನು ಬರುವುದನ್ನು ನೋಡಿದ ಗುಲ್ಲಿ ಒಂದು ಸರ್ತಿ ಖುಶಿ ಪಟ್ಟು ಟೆಂಟಿನ ಕಡೆ ಮುಖ ಮಾಡಿದಾಗ ನೀರು ಅದಾಗಲೇ ಕುಡಿಗಳನ್ನು ತೇಲಿಸಿಕೊಂಡು ತನ್ನೊಂದಿಗೆ ಕರೆದೊಯ್ಯುತ್ತಿತ್ತು. ಗುಲ್ಲಿ ನೀರಿಗಿಳಿದು ಈಜುವ ಪ್ರಯತ್ನ ಮಾಡಲಾರಂಬಿಸಿ ಆಗ್ತಾ ಇಲ್ಲ ಎಂದು ಅಳುತ್ತಾ ಮೇಲಕ್ಕೆ ಬಂತು .ಮಿನ್ನು ಮತ್ತು ಗುಲ್ಲಿಯ ಅಳುವಿಗೆ ಜನ ಹತ್ತಿರ ಬಂದರು .ಗುಲ್ಲಿಯ ಮರಿಗಳಿದ್ದ ಬುಟ್ಟಿ ಅದಾಗಲೇ ತುಂಬ ದೂರ ತೇಲಿತ್ತು.ಗುಲ್ಲಿ ಎಲ್ಲರಲ್ಲೂ ಬೇಡುತ್ತಿತ್ತು ಆದರೆ ಅವರೆಲ್ಲರೂ ನಿಸ್ಸಹಾಯಕರಾಗಿದ್ದರು.ಆಮರಿಗಳನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡು ಮುದ್ದು ಮಡುತ್ತಿದ್ದ ಮಿನ್ನುವಿನ ಅಳು ನೋಡಿ ಒಂದಿಬ್ಬರು ಕಂಬಳಿ ಹೊದ್ದುಕೊಂಡಿದ್ದ ಹೆಂಗಸರು ತಮ್ಮೊಂದಿಗೆ ಸೇರಿಸಿಕೊಂಡರು.ಗುಲ್ಲಿ ಇನ್ನು ಜನರನ್ನು ಬೇಡಿ ಏನೂ ಪ್ರಯೋಜನ ಇಲ್ಲ ಎಂದರಿತವಳೇ ತಾನೂ ನೀರಿಗೆ ದುಮುಕಿದಳು ಮಿನ್ನು ಕಿರುಚಾಡುತ್ತಳೇ ಇದ್ದಳು ......ಗುಲ್ಲಿ ಜನರ ಕಣ್ಣ ನೋಟಶಕ್ತಿಯಿಂದ ಮರೆಯಾದಳು.
ಸೇತುವೆಯ ಒಂದು ಬದಿ ನೀರ ಕೊರೆತಕ್ಕೆ ಸಿಕ್ಕು ಸಂಪರ್ಕ ಕಡಿದುಕೊಂಡಿತು.ವಿನಯನ ಮನೆಕಡೆಯಿಂದ ನಿಂತಿದ್ದ ಮಿನ್ನುವಿನ ಅಪ್ಪಾಮ್ಮ ಆಚೆ ಹೋಗಲಾರದೆ ಕಡಿದುಹೋಗಿರುವ ತಮ್ಮ ಟೆಂಟಿನ ಕಡೆಗೇ ನೋಡುತ್ತ ಜೋರಾಗಿ ಕೂಗು ಹಾಕುತ್ತಿದ್ದರು.ಆ ಬದಿಯಿಂದ ಅವರಿಗೆ ಮಿನ್ನು ಗುಲ್ಲಿ ಮತ್ತು ಮರಿಗಳು ನೀರು ಪಾಲಾದುದನ್ನು ತಲೆಗೆ ಲಟಿಕೆ ಹಾಕುತ್ತಿದ್ದ ಮಳೆಯಲ್ಲಿಯೇ ಕೂಗಿ ಹೇಳುವ ಪ್ರಯತ್ನ ಮಾಡುತ್ತಿದ್ದಳು. ನೀರ ಸದ್ದಲ್ಲಿ ಅವರ ಧ್ವನಿಯ ಸದ್ದಡಗುತ್ತಿತ್ತು ಆಚೀಚೆ ಕೇಳಿಸುತ್ತಿರಲಿಲ್ಲ.ವಿನಯನಿಗೆ ಮಿನ್ನುವಿನ ಅಪ್ಪಾಮ್ಮ ಹತ್ತಿರದಲ್ಲೇ ಇದ್ದುದರಿಂದ ಕಿರುಚಾಟಕ್ಕೆ ರಸಾಭಂಗವಾಗುತ್ತಿತ್ತು.ಮಂಚದ ಇಕ್ಕೆಲಗಳಲ್ಲಿದ್ದ ತತ್ಕಾಲ ಸಂಗಾತಿಯರನ್ನ ಆಚೆ ಸರಿಸಿದವನೇ ಕಿಟಕಿ ಬಳಿ ಬಂದು ಅವರನ್ನು ಕೆಟ್ಟದಾಗಿ ಬೈಯ್ಯಬೇಕೆಂದು ಬಾಯಿ ತೆಗೆದವನ ಮೊಬೈಲು ರಿಂಗಾಯ್ತು ಅತ್ತಲಿಂದ ಅಕಾಲ ಮಳೆಗೆ ಸೋತ ಇನ್ನೊಂದು ಇನಿದನಿಯಿತ್ತು. ಮಾತಾಡುತ್ತ ಮತ್ತೆ ಕಿಟಕಿ ಬಳಿಬಂದ ಪಾಚಿಹಳ್ಳದಲ್ಲಿ ಮಣ್ಣುಮಿಶ್ರಿತ ಕೆಂಪಗಿನ ನೀರು ತುಂಬ ಅಗಲವಾಗಿ ಹರಿಯುತ್ತಿತ್ತು.ಸೇತುವೆಯು ಮುಳುಗುವ ಹಂತಕ್ಕೆ ಬಂದಿತ್ತು,ಮೊನ್ನೆಮೊನ್ನೆ ಊರಿಗೆ ನಾನೇ ಅನಿವಾರ್ಯ ಎಂದು ಬೀಗುತ್ತಿದ್ದ ಸೇತುವೆಯ ಅಸ್ತಿತ್ವ ಪ್ರಶ್ನಾರ್ಥಕ ಚ್ಹಿನ್ನೆಯಾಗುವ ಹಾಗಿದೆ.ವಿನಯ ತನ್ನನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡ ಬೆತ್ತಲೆಯಾಗಿ .ಅವನ ಯೌವ್ವನ ಅವನಿಗೆ ಪ್ರಶ್ನೆ ಹಾಕತೊಡಗಿತು.ತಾನು ಯಾವತ್ತೂ ಸೋಲೋದೆ ಇಲ್ಲ ಅನ್ನುವ ರೀತಿಯಲ್ಲಿದೇಹದ ಅಂಗಾಂಗಗಳನ್ನು ಪೈಲ್ವಾನರ ಹಾಗೆ ಉಬ್ಬಿಸಿ ನೋಡಿಕೊಂಡ. ಹಿಂಬದಿಯಿಂದ ಬಂದು ನೇತುಬಿದ್ದ ಸಂಗಾತಿಗಳಿಗೆ ಲೆಕ್ಕ ಮಾಡದೆ ಕೆಲವು ನೋಟುಗಳನ್ನು ಕೊಟ್ಟ.ಹೊರಡುವಂತೆ ಸನ್ನೆ ಮಾಡಿದ.
ಗೋಡೆಗಳ ಮಧ್ಯೆ ಮಾನ ದುಡ್ಡಿನ ಹಂಗಲ್ಲಿ ಬೆತ್ತಲಾಗಿ ಕರಗಿ ಹೋಯ್ತು........ಬಯಲಲ್ಲಿ ಗುಲ್ಲಿಯ ಪ್ರಾಣ...... ಸಂತಾನದ ಹಂಗಲ್ಲಿ ಕೊಚ್ಚಿ ಹೋಯ್ತು.

0 Comments:

Post a Comment

Subscribe to Post Comments [Atom]

<< Home