Sunday, July 13, 2008

ಹೇಗಿರುತ್ತಿದ್ದರು

ತಾಯಿ ದೇಹದಿಂದ ಬೇರ್ಪಟ್ಟು ಜನನ ಆದ ಗಳಿಗೆಯಿಂದ ಆ ಮಗುವಿನ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಡುತ್ತಾ ಹೋಗುತ್ತೆ ಅಪ್ಪ ಅಮ್ಮಂಗೆ ಒಡಹುಟ್ಟಿದವರಿಗೆ ಮನೆಯ ಇತರರಿಗೆ......ಯಾವಾಗ ಆ ಮಗುವಿನ ದೇಹಗಟ್ಟಿಯಾಗುತ್ತಾ ಹೋಗುತ್ತಾ ಅವತ್ತಿನಿಂದ ಅದು ತನ್ನ ಬಗ್ಗೆ ಕನಸು ಕಾಣೋದಕ್ಕೆ ಶುರು ಮಾಡುತ್ತೆ.
ಕನಸು ಅದೊಂದು ಅದ್ಬುತ ಪ್ರಪಂಚ ಯಾವುದೇ ಟಿಕೆಟ್ಟಿಲ್ಲದೆ ಯಾರದೇ ಹಂಗಿಲ್ಲದೆ ಕೇಳದ್ದನ್ನು ನೋಡದ್ದನ್ನು ಹೀಗಾ ಎಂದು ಯೋಚಿಸಲೂ ಆಗದ್ದನ್ನು ವಿಚಿತ್ರಾವಿಚಿತ್ರ ಜಾಗಗಳಿಗೆ ಕರೆದೊಯ್ದು ತೊರಿಸುತ್ತೆ.ರಸಿಕನ ಎದುರು ಅತಿಸುಂದರಿ ಅರ್ಧ ತೋರಿಸಿ ಮಂಡಿಗೆ ಬೆಲ್ಲ ತಿನ್ನಿಸಿದ ಹಾಗೆ,ಎಚ್ಚರ ಆದ ನಂತರ ಕೈಗೆ ಸಿಗದ ಸುಂದರಿ ತೋರಿಸಿದ ಆ ಕನಸಿಗೆ ಅದೆಶ್ಟು ಶಾಪವೋ.ಆದರೂ ಕೆಲವೊಂದು ನಿಜವಾಗುವ ಕನಸುಗಳಿಗೆ ಅದೆಶ್ಟು ಮರ್ಯಾದೆ ಕದ್ದು ಮಾಡಿದ ಮಜಾದಶ್ಟು ಕುಶಿ ಕೆಲವರು ಹೇಳ್ಕೋತಾರೆ ಇನ್ನು ಕೆಲವರು ಅದುಮಿಟ್ಕೋತಾರೆ.
ಏನೇ ಇದ್ರು ಎಲ್ಲ ಕನಸುಗಳನ್ನು ಕಾಣೋದಕ್ಕೆ ಮೂಲ ಅಪ್ಪಾಮ್ಮ.ಅವರ ಮಿಲನದಿಂದ ಹುಟ್ಟಿದ್ದಕ್ಕೆ ಅವರ ಕಾಳಜಿಯಲ್ಲಿ ಬೆಳೆದು ಬಲಿತಿದ್ದಕ್ಕೆ ಎಲ್ಲ ತೆರನಾದ ಕನಸುಗಳ ಪ್ಯಾಕೇಜ್ ಲಭ್ಯ ಇದು ಎಲ್ಲರಿಗು ಮಿದುಳಿನ ಒಂದು ಮೂಲೆಯಲ್ಲಿ ಜಾಗ ಮಾಡಿಕೊಂಡು ಕುಳಿತಿರುವ ಸೆನ್ಸ್ ಯಾವಾಗ್ಲು ಹೇಳ್ತ ಇರುತ್ತೆ ಆದ್ರು ಬ್ಯುಸಿಯ ಮಧ್ಯೆ ಮರಿಯುತ್ತೆ.
ಹೀಗೆ ಎಲ್ಲ ರೀತಿಯ ಕನಸುಗಳನ್ನು ಕಾಣುತ್ತಾ ಇನ್ನೊಂದಶ್ಟು ಕನಸು ಕಾಣುವ ಜೀವಗಳಿಗೆ ಜನ್ಮಕೊಟ್ಟು ಜೀವನ ಸಾರ್ಥಕ.....?ಮಾಡಿಕೊಂಡವರು...ಕೆಲವರು ಅದೆಶ್ಟೋ ಬೆತ್ತಲೆ ದೇಹಗಳನ್ನು ನೋಡಿರುತ್ತಾರೆ ರಸಿಕತನದ ಅದೆಶ್ಟೋ ವರ್ಶಗಳನ್ನು ಕೆಲವೇ ವರ್ಶಗಳಲ್ಲಿ ನೋಡಿರುತ್ತಾರೆ ಸಂಬಂದವೇ ಇಲ್ಲದ ಜೀವ ಅತಿಯಾಗಿ ಮತ್ತೇರಿಸಿ ವಾಂತಿ ಮಾಡಿದಾಗ ಕೆಳಗೆ ಗಲೀಜು ಮಾಡಿದಾಗ ಬಾಚುತ್ತಾರೆ ತೊಳೆಯುತ್ತಾರೆ ಎಲ್ಲವೂ ಕಾಮದ ಹೆಸರಲ್ಲಿ ಡೋಂಟ್ ವರಿ ಅನ್ನುವ ನಾಳಿನ ಮತ್ತೆಯ ಬೇಡಿಕೆಯಲ್ಲಿ ಗೌಣ, ಹೇಸಿಗೆ ಇಲ್ಲ ವಾಸನೆ ಇಲ್ಲ..... ವಯಸ್ಸು ಮಾಗುತ್ತ ನೆನಪೂ ಇಲ್ಲ.ಮನೆಯಲ್ಲಿ ಸಾವಿರ ಸುಳ್ಳು ಹೇಳಿ ನಂಬಿಸಿದ ಸಂಸಾರದ ಜಂಜಾಟದ ಮಧ್ಯೆ ಮಾಗಿ ಹಣ್ಣುಹಣ್ಣಾದ ಹೆತ್ತವರ ಗೊಡವೆಯೆ ಮರ್ತಿರುತ್ತೆ.ಈ ಮರೆವಿನ ಸಂದುಗೊಂದುಗಳ ಮಧ್ಯೆ ಆ ಮುದಿ ಜೀವಗಳನ್ನು ಅಂತ್ಯಕಾಲದ ಗೆದ್ದಲು ಹಿಡಿದಿರುತ್ತದೆ.ಅವರು ಅಪಥ್ಯವಾಗುತ್ತಾರೆ ಅವರುಕನಸು ಕೊಟ್ಟವರಿಗೆ ಅವರ ಕೂಗು ಕೇಳಿಸುವುದಿಲ್ಲ ಜಾಸ್ತಿ ಕೂಗಿದರೆ ಮನೆಮೂಲೆಯ ಕೊಣೆಗೆ ದೂಡುತ್ತಾರೆ ಮನೆಗೆ ಬರುವವರ ಸಂಪರ್ಕ ತಪ್ಪಿಸುತ್ತಾರೆ ಏನೇನೋ ನೆಪ ಹೇಳಿ ಇಲ್ಲ ಆಶ್ರಮ ಸೇರಿಸುತ್ತಾರೆ.
ಈಗ ಮುಲೆ ಸೇರಿದವರಿಗೆ ಯಾವುದೇ ಕಾಮನೆಗಳಿಲ್ಲದಿದ್ದರು ಕಾಮ ಇರುವವರಿಗಿಂತ ಹೆಚ್ಚಿನ ಭಾವನೆಗಳು ಹುಟ್ಟುತ್ತೆ ಎಲ್ಲರನ್ನು ಹತ್ತಿರ ಬಯಸುತ್ತೆ ತನ್ನನ್ನು ಕೊಂಡಾಡುವ ಮಾತುಗಳನ್ನು ಸವಿಯುತ್ತೆ ಬಾಯಿ ಚಪ್ಪರಿಸಲು ಹಲವು ಕಾಯಿಲೆಗಳು ತಡೆದಿದ್ದರು ಬಂದವರ ಬೆನ್ನು ಚಪ್ಪರಿಸಲು ತವಕಿಸುತ್ತೆ ಸಾವ ಜಾರುಬಂಡಿಯ ತುದಿಯಲ್ಲಿರುವುದು ಗೊತ್ತಿದ್ದರು ಮತ್ತೆ ಕನಸುಗಳ ಮೆಲುಕು ಹಾಕುತ್ತೆ ಕಾಣೊಆಸೆ ತೋರಿಸುತ್ತೆ ಆದರೆ ನೆನಪುಗಳ ಕೊರತೆ....ಅಲ್ಲೂ ಗೆದ್ದಲುಗಳ ಸದ್ದು......
ಅಂತೂ ಅದೆಶ್ಟೋ ವರ್ಶಗಳ ಕೊಂಡಿ ಕಳಚಿ ಟಾಟಾ ಹೇಳಿದಾಗ ಪ್ರೀತಿಯಿಂದ ಬಂದವರ ಇನ್ನೊಬ್ಬರ ಬಾಯಿಗೆ ಸಿಗೋದು ಬೇಡ ಎಂದು ಬಂದವರ ಜಾತ್ರೆ ನಡೆಯುತ್ತೆ.ಸಂತೆಯಲ್ಲಿ ಹಲವಾರು ತರಹದ ಅಂಗಡಿಗಳಂತೆ ಇಲ್ಲೂ ಸತ್ತವರ ಕುರಿತಾಗಿ ಚರ್ಚೆಯ ಅಂಗಡಿಗಳು ,ಸವಿಯುವವರು ಜಗಿಯುವವರು ಉಗುಳುವವರು ಅತಿಯಾಗಿ ತೇಗಿಸಿಕೊಳ್ಳುವವರು ಅಂತೂ ಅಲ್ಲಿ ನವರಸದ ಭರ್ಜರಿ ಊಟ....ಇಉಗಳ ಮಧ್ಯೆ ಆತ್ಮವಿಲ್ಲದ ದೇಹಕ್ಕೆ ಸ್ನಾನ ....ನಂತರ ಭರ್ಜರಿ ಡ್ರೆಸ್ಸು.....ನಂತರ ಜೀವತವಾಗಿರುವಾಗ ಕುಡಿಸಿರಲಾರದಶ್ಟು ಶುದ್ದ ತೀರ್ಥ ಮಿಶ್ರಿತ ನೀರು ಕುಡಿಸುವವರೆಗೆ.....ನಂತರ ಚಟ್ಟಕ್ಕೇರಿಸಿ ಕಾಟದಲ್ಲಿಟ್ಟು ಕೊಳ್ಳಿ ಇಡುವವರೆಗೆ ಕೇಳಿಸುವ ಅಳುವಿನ ಸದ್ದು ತನಗರಿವಿಲ್ಲದೆಯೇ ಯವುದೋ ದಾರಿ ಹಿಡಿಯುತ್ತೆ.......ಬೆಂಕಿಯೇರಿಸಿಕೊಂಡ ಜೀವ ಒಂದೊಂದೇ ಕನಸುಗಳನ್ನು ಕಳಚುಕೊಳ್ಳುವಂತೆ ತನ್ನ ಭಾಗಗಳನ್ನು ಅರ್ಪಿಸಿಕೊಳ್ಳುತ್ತಾ ಇನ್ನೂ ತನ್ನಿರುವು ಸ್ವಲ್ಪ ಇದೆ ಅಂದುಕೊಳ್ಳುತ್ತಿರುವಾಗಲೆ ಅಲ್ಲಿಂದ ದೂರ ಸರಿದಿರುವ ತನ್ನವರು ಬೆಚ್ಚನೆ ಚಹಾದಿಂದ ಮನಸು ಸರಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ನಂತರ ಯಾರು ಅನ್ನುವ ಹೊಗೆಯನ್ನು ಎತ್ತರಕ್ಕೆ ಕಳಿಸುತ್ತ ಸ್ವಾಗತ ಕೋರುತ್ತೆ.
ಇಲ್ಲೊಂದು ಪ್ರಶ್ನೆ ......ದೇಹ ಉರಿದಾರುತ್ತಿರುವಂತೆ ಆತ್ಮೀಯರ ನಿಲ್ಲುವಅಳು ಮತ್ತೆ ನಿಶ್ಯಬ್ಧದಿಂದ ಚಲನೆಗೆ ಶುರುವಿಟ್ಟುಕೊಳ್ಳುವ ಹಸಿವು ಕಾಮನೆಗಳು ಜನರನ್ನುಸಾವಿನ ಭಯದಿಂದ ದೂರವಿಟ್ಟು ದುರಾಸೆಯನ್ನು ಬೆಳೆಸುವುದೇತಕ್ಕೆ ದ್ವೇಶದ ಕಿಚ್ಚು ಹಚ್ಚುವುದೇತಕ್ಕೆ........
ಒಂದು ವೇಳೆ ಮೋಡ ಕೆಚ್ಚಲು ಕಟ್ಟದಿದ್ದರೆ ಕಡಲುಮಿಸುಕಾಡದೆ ಕುಳಿತರೆ ಭೂಮಿಮೊಳಳಕೆಯೊಡೆಯದಿದ್ದರೆ.......
ಹೀಗೆ ಬೆದರಿಕೆಯಿದ್ದಿದ್ದರೆ ಜನ ಹೀಗಿರುತ್ತಿದ್ದರೆ .....

0 Comments:

Post a Comment

Subscribe to Post Comments [Atom]

<< Home