Sunday, June 8, 2008

ಬತ್ತಿದೆ

ಶುದ್ದಪ್ರೇಮಪತ್ರ ಬರಿಬೇಕೆಂದವನ ಊರಲ್ಲಿ ಒಂದು ಹನಿಮಳೆಯನ್ನೂ ಬಿತ್ತಲಿಲ್ಲ ಆಕಾಶ
ವಿರಹಪತ್ರ ಬರಿಬೇಕೆಂದವನ ಊರಲ್ಲಿ ಕೆರೆಯು ಬತ್ತಲಿಲ್ಲ ಮರವು ಬೆತ್ತಲಾಗಲಿಲ್ಲ
ಇದಾವುದರ ಪರಿವೆ ಇಲ್ಲದ ...... ಬೆವರು ಸುರಿಸೋದೆ ತನ್ನ ಕರ್ಮ....ಏನು ಬೆಳೆಯೋದು ಎಂದು
ಯೋಚಿಸುವ ರೈತನಿಗೆ .....ಬಿತ್ತೋಕೆ ಬೀಜವು ಇಲ್ಲ ಉಣಿಸೋಕೆ ರಸಗೊಬ್ಬರವೂ ಇಲ್ಲ
ಅವನ ಬದುಕುವ ಆಸೆ ಹೇಳುವ ಬರಹಕ್ಕೆ ಪೆನ್ನೇಇಲ್ಲ.....
ಇದ್ದುದರಲ್ಲಿಯು ಶಾಯಿಬತ್ತಿದೆ ಅದಕ್ಕೂ ಬೇಜಾರು ಎಂದೋ ಸಾಲದ ಸಹಿಗಾಗಿ ಮಾತ್ರ ನನ್ನ ಮುಟ್ಟಿದ್ದೆ ಎಂದು
ಈಗವನಲ್ಲಿ ಇರುವುದೊಂದೇ ಶಾಲು ...ಅದೂ ಊರ ಅಂಗಡಿಯಿಂದ ಸಾಲ ತಂದಿದ್ದು
ಅದು ತನ್ನ ಬೆವರೊರಸಲೂ ಸಾಲುತ್ತಿಲ್ಲ ,ಮನೆಯವರ ಕಣ್ಣೊರೆಸಲೂ ಇಲ್ಲ
ಸೋತು
ಎದೆಗೆ ಹಾಸಿ ಬಯಲಲ್ಲಿ ಮಲಗಿದರು ರಕ್ತ ಆವಿಯಾಗಿ ಎದ್ದೆದ್ದು ಕಾಣುವ
ಗೂಡೂ ಮುಚ್ಚಲಿಲ್ಲ.....

0 Comments:

Post a Comment

Subscribe to Post Comments [Atom]

<< Home